ಶನಿವಾರಸಂತೆ, ನ. 1: ನ್ಯಾಷನಲ್ ಶೋಟೊಕಾನ್ ಕರಾಟೆ ಮಲ್ಟಿ ಪರ್ಪಸ್ ಫೆಡರೇಷನ್ ಹಾಸನ ಇವರ ವತಿಯಿಂದ ನಡೆದ ಕರಾಟೆಯ ವಿವಿಧ ಬೆಲ್ಟ್‍ಗಳ ಪರೀಕ್ಷೆಗಳಲ್ಲಿ ಭಾಗವಹಿಸಿ, ಸುಪ್ರಜ ಗುರುಕುಲ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಗಳು ಉತ್ತೀರ್ಣರಾಗಿರುತ್ತಾರೆ. ತೀರ್ಪುಗಾರರಾಗಿ ಎನ್.ಎಸ್.ಕೆ.ಎಂ. ಎಫ್.ನ ಅಧ್ಯಕ್ಷ ಸೆನ್ಸಿ ಕೆ.ಜೆ. ಅನಂತ ಕುಮಾರ್ ಸೆನ್ಸಿ ಪೃಥ್ವಿಕುಮಾರ್, ಸೆನ್ಸಿ ಶಿವಕುಮಾರ್, ಸೆನ್ಸಿ ರಾಜೇಶ್ ಅವರು ಪಾಲ್ಗೊಂಡಿದ್ದರು ಎಂದು ಕರಾಟೆ ತರಬೇತುದಾರ ಸೆನ್ಸಿ ಬಿ.ಕೆ. ಪರಮೇಶ್ ಅವರು ತಿಳಿಸಿದ್ದಾರೆ.

ಉತ್ತೀರ್ಣರಾದ ವಿದ್ಯಾರ್ಥಿ ಗಳಿಗೆ ಸುಪ್ರಜ ಗುರುಕುಲದ ಕಾರ್ಯದರ್ಶಿ ಗುರುಪ್ರಸಾದ್ ಹಾಗೂ ಅಧ್ಯಕ್ಷೆ ಡಿ. ಸುಜಲಾದೇವಿ ಅವರು ಬೆಲ್ಟ್ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು.