ಶನಿವಾರಸಂತೆ, ನ. 2: ರಾತ್ರಿ ವೇಳೆ 10 ಗಂಟೆಗೆ ಮನೆಗೆ ತೆರಳುತ್ತಿದ್ದ ಕಾರು (ಕೆಎ 13, ಎಂ-9728) ಚಾಲಕನ ನಿಯಂತ್ರಣ ಕಳೆದುಕೊಂಡು ತಲೆಕೆಳಗಾಗಿ ಮಗುಚಿಕೊಂಡು ಚರಂಡಿಯಲ್ಲಿ ಬಿದ್ದಿದೆ. ಕಾರಿನೊಳಗಿದ್ದ ಈರ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಹ ಗ್ರಾಮದಲ್ಲಿ ನಡೆದಿದೆ.

ಯಸಳೂರು ಪೇಟೆಯ ನಾಗೇಶ್ ಸ್ನೇಹಿತರಿಬ್ಬರು ರಾತ್ರಿ 10 ಗಂಟೆಗೆ ಶನಿವಾರಸಂತೆಯಿಂದ ಯಸಳೂರಿಗೆ ಹೋಗುತ್ತಿರುವಾಗ ಬಿಳಹ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಕಾರಿನ ಬಾಗಿಲು ತೆರೆಯಲಾರದೆ ಗಾಜನ್ನು ಒಡೆದು ಹಾಕಿ ಕಾರಿನಿಂದ ಹೊರ ಬರಲಾಗಿದ್ದು, ಈರ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.