ವೀರಾಜಪೇಟೆ, ನ. 1: ದೇಶದಲ್ಲಿ ಹೊಗೆ ರಹಿತ ಮನೆಯ ಕಲ್ಪನೆ ಕೇಂದ್ರ ಸರ್ಕಾರದ ಕಲ್ಪನೆಯಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಸಮಾರಂಭದಲ್ಲಿ ಹೇಳಿದರು.ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದ ತರ್ಮೆಮೊಟ್ಟೆ ಗ್ರಾಮದ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಉಚಿತ ಅನಿಲ ವಿತರಣಾ ಸಮಾರಂಭದಲ್ಲಿ ಬೋಪಯ್ಯ ಮಾತನಾಡಿದರು.ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಅನಿಲ ಸಂಪರ್ಕ ಪಡೆದುಕೊಂಡು ಆರೋಗ್ಯಯುಕ್ತ ಜೀವನವನ್ನು ಸಾಗಿಸಬೇಕು ಎಂದು ಹೇಳಿದರು. ಕೆದಮಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಂ. ಪರಮೇಶ್ವರ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಎನ್. ಕಾರ್ಯಪ್ಪ, ಕಿರಣ್ ಕುಮಾರ್, ಮಾಜಿ ಸೈನಿಕ ಪಟ್ರಪಂಡ ರಮೇಶ್ ಕರುಂಬಯ್ಯ, ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯರಾದ ರತೀಶ್, ಶರಣು ಮತ್ತು ಪ್ರಸನ್ನ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗೌಡುದಾರೆ ಚೋಟು ಬಿದ್ದಪ್ಪ, ಭಾರತ್ ಗ್ಯಾಸ್ ಏಜೆನ್ಸಿ ವಿತರಕ ಬೊಳ್ಳಚೆಟ್ಟಿರ ಪ್ರವೀಣ್ ಉಪಸ್ಥಿತರಿದ್ದರು.