ಮಡಿಕೇರಿ, ನ. 2: ಸೂರ್ಲಬ್ಬಿ ಗ್ರಾಮದಲ್ಲಿ ಅಪ್ಪುಡ ಸತೀಶ್ ಎಂಬಾತನ ಮೇಲೆ ಕೋವಿಯಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದ ಆರೋಪಿ ಅಪ್ಪುಡ ವಿಜು ಭೀಮಯ್ಯ ಎಂಬಾತನನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಿದ್ದು, ಜಿಲ್ಲಾ ಕಾರಾಗೃಹದಲ್ಲಿ ದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಅಲ್ಲದೆ ಗುಂಡೇಟಿನಿಂದ ಗಾಯಗೊಂಡಿದ್ದು, ಪ್ರಾಣಾಪಾಯ ದಿಂದ ಪಾರಾಗಿರುವ ಸತೀಶ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿ ಭೀಮಯ್ಯ ನೀಡಿರುವ ಪ್ರತ್ಯೇಕ ದೂರಿನಡಿಯಲ್ಲಿ ಗಾಯಾಳು ಸತೀಶ್ ಹಾಗೂ ಆತನ ಸಂಬಂಧಿಕರ ಮೇಲೂ ದೂರು ದಾಖಲಿಸಿಕೊಂಡಿರುವದಾಗಿ ಮೂಲಗಳು ಖಚಿತಪಡಿಸಿವೆ.