ಮಡಿಕೇರಿ, ನ. 2: ಕಳೆದ ಅ. 28ರಂದು ಕೆದಮುಳ್ಳೂರು ಗ್ರಾಮದಲ್ಲಿ ಪತ್ನಿ ರಮ್ಯಾಳ ತಲೆಗೆ ಗುಂಡುಹೊಡೆದು ಕೊಲೆ ಯತ್ನ ದೊಂದಿಗೆ ತಲೆಮರೆಸಿಕೊಂಡಿರುವ ಆರೋಪಿ ಕೊಚ್ಚೇರ ನಂದಾ ಪಳಂಗಪ್ಪ ಬಂಧನಕ್ಕೆ ಶೋಧ ಮುಂದುವರಿದಿದೆ.

ಆರೋಪಿಯ ಹುಟ್ಟೂರು ಹಮ್ಮಿಯಾಲದಲ್ಲಿ ಆತನ ಮನೆಗೆ ತೆರಳಿ ಬರಿಗೈನಲ್ಲಿ ಹಿಂತಿರುಗಿರುವ ವೀರಾಜಪೇಟೆ ಗ್ರಾಮಾಂತರ ಪೊಲೀಸರು, ನಂದಾ ಪಳಂಗಪ್ಪನ ಸಂಬಂಧಿಕರು ಹಾಗೂ ನೆಂಟರ ಮನೆಗಳಲ್ಲಿಯೂ ಆರೋಪಿಯ ಸುಳಿವಿಗೆ ಶೋಧ ನಡೆಸುತ್ತಿರುವದಾಗಿ ಮಾಹಿತಿ ಲಭಿಸಿದೆ.

ಪತ್ನಿ ರಮ್ಯ ಚೇತರಿಸಿ ಕೊಳ್ಳುತ್ತಿದ್ದು, ಆರೋಪಿಯ ಬಂಧನವಾಗದ ಹಿನ್ನೆಲೆ ಭಯದಲ್ಲಿ ದಿನ ಕಳೆಯುವಂತಾಗಿದೆ ಎಂದು ಗಾಯಾಳು ತಾಯಿ ಲೀಲಾವತಿ ಅಳಲು ತೋಡಿಕೊಂಡಿದ್ದಾರೆ.