ಸಿದ್ದಾಪುರ, ನ. 2: ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿಯವರ ಅನುದಾನದಲ್ಲಿ ಮಾಲ್ದಾರೆ ಹಾಗೂ ಚೆನ್ನಯ್ಯನಕೋಟೆ ಕ್ಷೇತ್ರದ ಸುಮಾರು ಮೂವತ್ತಕ್ಕೂ ಹೆಚ್ಚು ಬಡ ಹೆಣ್ಣು ಮಕ್ಕಳಿಗೆ ಹಾಗೂ ಅಂಗವಿಕಲರಿಗೆ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು. ಚೆನ್ನಯ್ಯನ ಕೋಟೆ ಮಸೀದಿ, ಬಾಡಗ ಮಸೀದಿ, ಬಜೆಗೊಲ್ಲಿ ಪೈಸಾರಿ ಹಾಗೂ ಹುಂಡಿ ಮುತ್ತಪ್ಪ ದೇವಾಲಯ, ಕೋಟೆ ಪೈಸಾರಿ ಅಯ್ಯಪ್ಪ ದೇವಾಲಯ, ಮಾಲ್ದಾರೆ ಸಿದ್ದಪ್ಪಾಜಿ ದೇವಾಲಯ ಗಳಿಗೆ ಸೋಲಾರ್ ಬೀದಿ ದೀಪಗಳನ್ನು ವಿತರಿಸಲಾಯಿತು. ಈ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೋಪಣ್ಣ, ಕೆ.ಪಿ.ಸಿ.ಸಿ. ಮುಖಂಡ ಪಿ.ಸಿ. ಹಸೈನಾರ್ ಹಾಜಿ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಾಂ, ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ. ಮಣಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಣ್ಣಯ್ಯ, ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ. ಮೋಹನ್, ತಾ.ಪಂ. ಸದಸ್ಯೆ ಚಿನ್ನಮ್ಮ, ಮಾಜಿ ಸದಸ್ಯ ಸಿ.ಎ. ಹಂಸ, ಚೆನ್ನಯ್ಯನ ಕೋಟೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಯ್ಯ, ಬ್ಲಾಕ್ ಕಾಂಗ್ರೆಸ್ ಸಮಿತಿಯ ಯೋಗೇಶ್, ಜಾನ್ಸನ್, ಗ್ರಾ.ಪಂ. ಸದಸ್ಯ ಜಾಫರ್ ಆಲಿ, ಮೂಸ, ಮಾಲ್ದಾರೆ ಬಾವ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.