ಸೋಮವಾರಪೇಟೆ, ನ.3: ಕರ್ನಾಟಕ ಸರ್ಕಾರ ಹಿಂದೂ ವಿರೋಧಿ ಹಾಗೂ ರಾಷ್ಟ್ರ ವಿರೋಧಿಯಾಗಿದ್ದ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸುತ್ತಿರುವದು ಖಂಡನೀಯ. ಜಯಂತಿಯನ್ನು ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿ ಹಿಂದೂ ಜನ ಜಾಗೃತಿ ಸಮಿತಿಯ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು, ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಮೈಸೂರು ಕೊಡಗು ಜಿಲ್ಲಾ ಸಮನ್ವಯಕ ಕೆ.ಶಿವರಾಂ, ಕೇಂದ್ರ ಸಮನ್ವಯಕ ಗಿರಿಧರ್, ಪ್ರಮುಖರಾದ ಬಿ.ವಿ. ಸಂತೋಷ್ ಕುಮಾರ್, ಎಂ.ಬಿ.ಅಭಿಮನ್ಯು ಕುಮಾರ್, ಮಧು, ಬಿ.ಎಸ್.ವಿಜಯಲಕ್ಷ್ಮಿ, ನಳಿನಿ ಗಣೇಶ್, ಜಿ.ಎ. ಉದಯ, ಟಿ.ಕೆ.ರಮೇಶ್, ಎಂ.ಬಿ. ಉಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.