ಶ್ರೀಮಂಗಲ, ನ. 4: ಬ್ರಹ್ಮಗಿರಿ ಅರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿ ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ ಮೇಪಾಳಿ ಎಂಬ ಸ್ಥಳದಲ್ಲಿ ನಿಧಿ ಹುಡುಕಾಟ ಮಾಡುತ್ತಿದ್ದ ಕೇರಳ ರಾಜ್ಯದ ವಿನೋದ್, ಸುಂದರನ್, ಸೆಲ್ವ ಮಣಿ, ಹಾಗೂ ಶಾಜು ಎಂಬವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದು, ಪ್ರಕರಣದ ಪ್ರಮುಖ ಆರೊಪಿಗಳಾದ ಸ್ಥಳೀಯರಾದ ವಿಶ್ವನಾಥ್, ಪ್ರಿತಂ, ಹರೀಶ್ ಹಾಗೂ ಶಿವಪ್ಪ ತಲೆ ಮರೆಸಿಕೊಂಡಿದ್ದು, ಇವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಅರಣ್ಯದೊಳಗೆ ಎರಡು ಕಡೆಗಳಲ್ಲಿ ಗುಂಡಿಯನ್ನು ತೊಡಲಾಗಿದ್ದು ಅರೋಪಿಗಳಿಂದ ಕೃತ್ಯಕ್ಕೆ ಬಳಸಿದ ಹಾರೆ, ಪಿಕಾಸಿ, ಸುತ್ತಿಗೆ, ಡೈನಮೈಟ್ ಮುಂತಾದ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿಯನ್ನು ಅಧರಿಸಿ ಅರ್.ಎಫ್.ಓ. ವೀರೇಂದ್ರ, ಡಿ.ಅರ್.ಎಫ್.ಓ.ಗಳಾದ ನಿಶಾರ್ ಅಹಮದ್ದ್, ಹರೀಶ್, ಗಾರ್ಡ್‍ಗಳಾದ ಅಪ್ಪಣ್ಣ, ಅಶೋಕ ಕಾರ್ಯಾಚರಣೆ ನಡೆಸಿದರು.