ಮಡಿಕೇರಿ, ನ. 6: ಮಡಿಕೇರಿ ನಗರದ ಸಮೀಪದ ಕೆ. ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ಣಂಗೇರಿ ಗ್ರಾಮದ ಚಂದ್ರಗಿರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಗ್ರಾಮ ಪಂಚಾಯಿತಿಯಿಂದ ನಿರ್ಮಿಸಿದ ಕುಡಿಯುವ ನೀರಿನ ಟ್ಯಾಂಕ್‍ನ್ನು ಗ್ರಾಮದ ಹಿರಿಯರಾದ ಚೋಂದಮ್ಮ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಜಾನ್ಸನ್ ವಿಂಟೋ ಅವರು ಉದ್ಘಾಟಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಹೆಚ್.ಆರ್. ಪ್ರೇಮ್ ಕುಮಾರ್, ಮಾಜಿ ಸದಸ್ಯ ಡಿಸೋಜ, ಗ್ರಾಮಸ್ಥರಾದ ಕೆ.ಕೆ. ಶಶಿಕುಮಾರ್, ಮಹೇಶ್, ಅಬ್ದುಲ್ ರಜಾóಕ್, ವಿಶ್ವನಾಥ್, ದಿನೇಶ್, ಪಾಪು, ಮನು, ಗೌರಿ, ಆಶಾ, ಪುಷ್ಪ, ಬಸಪ್ಪ, ವಾಟರ್‍ಮನ್ ಮೋಣಪ್ಪ ಮತ್ತು ಗುತ್ತಿಗೆದಾರರಾದ ಧರ್ಮರಾಜ್ ಮತ್ತಿತರರು ಹಾಜರಿದ್ದರು.