ಕುಶಾಲನಗರ, ನ. 6: ಶ್ರೀ ಗಣಪತಿ ರಥೋತ್ಸವ ಅಂಗವಾಗಿ ಸೋಮವಾರ ದೇವಾಲಯದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಈ ಸಂದರ್ಭ ದೇವರಿಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಪ್ರಧಾನ ಅರ್ಚಕÀ ಆರ್.ಕೆ. ನಾಗೇಂದ್ರ ನೇತೃತ್ವದ ತಂಡದ ಅರ್ಚಕರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಕುಶಾಲನಗರ ದೇವಾಲಯಗಳ ಒಕ್ಕೂಟದ ಸದಸ್ಯರು ಈ ಸಂದರ್ಭ ದೇವರಿಗೆ ಫಲಪುಷ್ಪ ಅರ್ಪಿಸುವ ದರೊಂದಿಗೆ ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು.

ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ವಿ.ಎನ್. ವಸಂತಕುಮಾರ್, ಕಾರ್ಯದರ್ಶಿ ಎಸ್.ಕೆ.ಶ್ರೀನಿವಾಸ್ ರಾವ್, ಖಜಾಂಚಿ ಎಂ.ಕೆ.ದಿನೇಶ್, ನಿರ್ದೇಶಕರಾದ ಜಿ.ಎಲ್.ನಾಗರಾಜ್, ವಿ.ಡಿ. ಪುಂಡರೀಕಾಕ್ಷ, ಹೆಚ್.ಎನ್. ರಾಮಚಂದ್ರ, ವೈ.ಆರ್. ನಾಗೇಂದ್ರ, ದೇವಾಲಯಗಳ ಒಕ್ಕೂಟ ಸಮಿತಿಯ ಪ್ರಮುಖರು ಈ ಸಂದರ್ಭ ಇದ್ದರು.