ಗೋಣಿಕೊಪ್ಪಲು, ನ. 5: ವೀರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಕೈಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿರುವ ಎನ್‍ಎಸ್‍ಎಸ್ ವಾರ್ಷಿಕ ಶಿಬಿರದಲ್ಲಿ ಎಂ.ಎನ್. ಅಜಯ್ ನಾರಾಯಣ ಅವರಿಂದ ವಿಶ್ವದ ಹಳೆ ನಾಣ್ಯ-ನೋಟುಗಳ ಪ್ರದರ್ಶನ ಗಮನ ಸೆಳೆಯಿತು.

ನಿನಾದ ಸಂಗೀತ ಮತ್ತು ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷೆ ಚೇಂದಿರ ನಿರ್ಮಲಾ ಬೋಪಣ್ಣ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

ಉನ್ಯಾಸಕ ಡಾ. ಜೆ. ಸೋಮಣ್ಣ, ಇಗ್ಗುತಪ್ಪ ಕೊಡವ ಸಂಘದ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ, ತಾ.ಪಂ. ಸದಸ್ಯ ಜಯ ಪೂವಯ್ಯ, ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ಕುಪ್ಪಂಡ ದತ್ತಾತ್ರಿ, ನಿವೃತ್ತ ಶಿಕ್ಷಕ ಸಣ್ಣುವಂಡ ದೇವಯ್ಯ, ಸ್ಥಳೀಯರುಗಳಾದ ಕೊಕ್ಕಂಡ ಕುಶ ಬಿದ್ದಪ್ಪ, ಕಾವೇರಿ ವಿದ್ಯಾಸಂಸ್ಥೆ ನಿರ್ದೇಶಕ ಸಿ.ಡಿ. ಮಾದಪ್ಪ, ಕಾಫಿ ಬೆಳೆಗಾರ ಕರ್ತಮಾಡ ಕುಮಾರ್ ಕಾಳಪ್ಪ, ಶಿಬಿರಾಧಿಕಾರಿ ಕೆ.ಎಂ. ಕುಸುಮ್, ಸಹ ಶಿಬಿರಾಧಿಕಾರಿ ಕೆ.ಪಿ. ಗಾಯತ್ರಿ ಹಾಜರಿದ್ದರು.