ಮಡಿಕೇರಿ, ನ. 7: ಚೇರಂಬಾಣೆಯಲ್ಲಿ ಗೋಮಾಂಸ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಅಸ್ಸಾಂನ ಇಬ್ಬರನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಡಿದು ಭಾಗಮಂಡಲ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.ಆರೋಪಿಗಳಾದ ಜಾನ್ಮಿಯಾ ಹಾಗೂ ಮೊಹರಾಲಿ ಎಂಬಿಬ್ಬರ ಸಹಿತ 6 ಕೆ.ಜಿ. ಗೋಮಾಂಸ ವಶಕ್ಕೆ ಪಡೆದಿರುವ ಪೊಲೀಸರು ಕಾನೂನು ಕ್ರಮಕೈಗೊಂಡಿದ್ದಾರೆ.ಮೊಹರಾಲಿ ನಾಪೋಕ್ಲುವಿನ ಅಹ್ಮದ್ ಎಂಬವರ ತೋಟದಲ್ಲಿ ಕಾರ್ಮಿಕನಾಗಿದ್ದರೆ, ಜಾನ್ಮಿಯಾ ಕೊಳಗದಾಳುವಿನ ಪಿ.ಸಿ. ಕೃಷ್ಣ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿದ್ದ.