ಶ್ರೀಮಂಗಲ, ನ. 7: ಪೊನ್ನಂಪೇಟೆ ತಾಲೂಕು ಪುನರಚನಾ ಸಮಿತಿ ವತಿಯಿಂದ ನಡೆಯುತ್ತಿರುವ 7ನೇ ದಿನದ ಪ್ರತಿಭಟನೆಯಲ್ಲಿ ಪೊನ್ನಂಪೇಟೆ ನಂದೀಶ್ವರ ವಾಹನ ಮಾಲೀಕರ ಆಟೋ ಚಾಲಕರ ಸಂಘ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವದರ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಅಜ್ಜಿಕುಟ್ಟಿರ ಪೊನ್ನಪ್ಪ ಅವರ ಮುಂದಾಳತ್ವದಲ್ಲಿ ಪ್ರತಿಭಟನಾ ಸ್ಥಳಕ್ಕೆ ತೆರಳಿದ ಸಂಘದ ಕಾರ್ಯದರ್ಶಿ ಶಾಂತ ಪೊನ್ನಪ್ಪ, ಕಾರ್ಯದರ್ಶಿ ಚೀರಂಡ ನಂಜಪ್ಪ, ಸದಸ್ಯರಾದ ಮಹಮದ್, ಸುರೇಶ್, ಅಜೀಜ್, ನವೀನ್, ಮೋಹನ್, ಮುಕುಂದ, ಸುಂದರ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಪಿ.ಕೆ. ಪೂಣಚ್ಚ, ಕೊಡವ ತಕ್ಕ್ ಜನಾಂಗದ ಅಧ್ಯಕ್ಷ ಕೊರಕುಟ್ಟೀರ ಸರ ಚಂಗಪ್ಪ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಮಾತನಾಡಿದರು.

ಈ ಸಂದರ್ಭ ಪೊನ್ನಂಪೇಟೆ ತಾಲೂಕು ಪುನರಚನಾ ಸಮಿತಿಯ ಪದಾಧಿಕಾರಿಗಳಾದ ಚೆಪ್ಪುಡೀರ ಪೊನ್ನಪ್ಪ, ಕಟ್ಟೇರ ಲಾಲಪ್ಪ, ತೀತಮಾಡ ಗಣೇಶ್, ಗ್ರಾ.ಪಂ. ಸದಸ್ಯೆ ಮೂಕಳೇರ ಕಾವ್ಯ, ಕಾಳಿಮಾಡ ಮೋಟಯ್ಯ, ನಾಗರಿಕ ವೇದಿಕೆಯ ಸದಸ್ಯರು, ಮತ್ತಿತರರು ಹಾಜರಿದ್ದರು.