ವೀರಾಜಪೇಟೆ, ನ. 8: ಪ್ರಧಾನಿ ನರೇಂದ್ರ ಮೋದಿ ಅವರು ನೋಟ್ ಬ್ಯಾನ್ ಮಾಡಿದ್ದರಿಂದ ಭ್ರಷ್ಟಾಚಾರ ನಿರ್ಮೂಲನೆಗೊಂಡಿದೆ. ಯಾರು ಕಪ್ಪು ಹಣ ಹೊಂದಿದ್ದಾರೋ ಅವರನ್ನು ಮಟ್ಟ ಹಾಕಿದಂತಾಗಿದೆ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಪ್ರಧಾನಿ ಅವರು ನೋಟ್ ಬ್ಯಾನ್ ಮಾಡಿ ಒಂದು ವರ್ಷವಾದ ಹಿನ್ನಲೆಯಲ್ಲಿ ಬಿ.ಜೆ.ಪಿ. ಪಕ್ಷದ ನಗರ ಸಮಿತಿಯಿಂದ ಪಟ್ಟಣದ ಗಡಿಯಾರ ಕಂಬದ ಬಳಿ ಹಮ್ಮಿಕೊಂಡಿದ್ದ ಕಪ್ಪು ಹಣ ವಿರೋಧಿ ದಿನ ಹಾಗೂ ಸಂಭ್ರಮ ಆಚರಣೆಯಲ್ಲಿ ಭಾಗವಹಿಸಿದ್ದ ಕೆ.ಜಿ. ಬೋಪಯ್ಯ ಕೇಂದ್ರ ಸರಕಾರದಿಂದ ಮುಂದಿನ ದಿನದಲ್ಲಿ ಅತ್ಯಂತ ಯಶಸ್ವಿಯಾಗಿ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ ಎಂದರು.

ಈ ಸಂದರ್ಭ ಜಿ.ಪಂ. ಸದಸ್ಯ ಶಶಿ ಸುಬ್ರಮಣಿ, ಬಿ.ಜೆ.ಪಿ.ಯ ರಾಜ್ಯ ಸಮಿತಿಯ ಮನುಮುತ್ತಪ್ಪ, ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಟ್ರಪಂಡ ರಘುನಾಣಯ್ಯ, ಕಾಫಿ ಮಂಡಳಿಯ ರೀನಾ ಪ್ರಕಾಶ್, ಎಂ. ಮದು ದೇವಯ್ಯ, ನಗರ ಸಮಿತಿಯ ಅಧ್ಯಕ್ಷ ಅನಿಲ್ ಮಂದಣ್ಣ, ಪ್ರಧಾನ ಕಾರ್ಯದರ್ಶಿ ದಿವಾಕರ್ ಶೆಟ್ಟಿ, ಯೋಗೇಶ್ ನಾಯ್ಡು, ಆಶಾ ಸುಬ್ಬಯ್ಯ, ಮಾಜಿ ಯೋಧರ ಸಂಘದ ಅಧ್ಯಕ್ಷ ಗಣೇಶ್ ನಂಜಪ್ಪ, ಪ.ಪಂ. ಅಧ್ಯಕ್ಷ ಇ.ಸಿ.ಜೀವನ್, ಮಾಜಿ ಅಧ್ಯಕ್ಷೆ ಎಂ.ಕೆ. ದೇಚಮ್ಮ, ಕೂತಂಡ ಸಚಿನ್, ಅಗ್ನಿದಳ ಸಂಘಟನೆಯ ದಿನೇಶ್ ನಾಯರ್, ಟಿ.ಪಿ.ಕೃಷ್ಣ, ಮುಂತಾದವರು ಹಾಜರಿದ್ದರು.