ಮಡಿಕೇರಿ, ನ. 8: ದೇಶದ ಪ್ರಧಾನಿ ಮೋದಿ ಅವರ ದಿಟ್ಟ ನಿರ್ಧಾರದೊಂದಿಗೆ ರೂ. 500 ಹಾಗೂ 1000 ನೋಟ್‍ಗಳ ಬ್ಯಾನ್‍ಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಂಪಾಜೆ, ಚೆಂಬು, ಪೆರಾಜೆ ಸುತ್ತಮುತ್ತಲಿನ ಭಾಜಪ ಕಾರ್ಯಕರ್ತರಿಂದ ಯಶಸ್ವಿ ದಿವಸದ ಸಂಭ್ರಮಾಚರಣೆ ನಡೆಯಿತು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಕ್ಯಾ. ಗಣೇಶ್ ಕಾರ್ಣಿಕ್ ನೋಟ್ ಬ್ಯಾನ್‍ನ ಉದ್ದೇಶ ಮತ್ತು ನಂತರದಲ್ಲಿ ದೇಶದಲ್ಲಿ ಆದಂತಹ ಉತ್ತಮ ಬೆಳವಣಿಗೆಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಮುಖರಾದ ಬಾಲಚಂದ್ರ ಕಳಗಿ, ನಾಗೇಶ್ ಕುಂದಲ್ಪಾಡಿ, ಮಾಧವ ಪೊಯ್ಯಮಜಲು, ಬಿ.ಆರ್. ಸುಂದರ, ಮೋನಪ್ಪ, ಕುಮಾರ್, ಮಾಯಿಲಪ್ಪ, ತೀರ್ಥರಾಮ ವಿಜಯ್ ನಿಡಿಂಜಿ, ಉದಯ್, ವಿನಯ್, ಚರಿತ, ದÀಯಾ. ತೀರ್ಥ ಕೋಲ್ಚಾರ್, ದೇವಪ್ಪ, ಜಗದೀಶ್, ಶ್ರೀಧರ, ಮಾಲತಿ, ಮೋಹನಾಂಗಿ ಮತ್ತಿತರರು ನೂರಾರು ಸಂಖ್ಯೆಯಲ್ಲಿ ಸೇರಿ ಘೋಷಣೆ ಕೂಗಲಾಯಿತು. ನಂತರ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.