ನಾಪೋಕ್ಲು, ನ. 8: ಇಲ್ಲಿಗೆ ಸಮೀಪದ ನೆಲಜಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಗ್ರಾಮವಾಸಿಗಳ ಕಾಫಿ ತೋಟ ಹಾಗೂ ಕೃಷಿ ಪ್ರದೇಶಗಳಿಗೆ ನುಗ್ಗಿರುವ ಕಾಡಾನೆಗಳು, ಕಾಫಿ, ಏಲಕ್ಕಿ, ಕರಿಮೆಣಸು, ಅಡಿಕೆ ಕೃಷಿಯನ್ನು ತುಳಿದು ಧ್ವಂಸಗೊಳಿಸಿವೆ

ಗ್ರಾಮದ ನಿವಾಸಿ ಮಾಣಿಚಂಡ ಪಳಂಗಪ್ಪ ಎಂಬವರ ತೋಟಕ್ಕೆ ನುಗ್ಗಿರುವ ಕಾಡಾನೆಗಳು ಕಾಫಿ, ಬಾಳೆ, ಕರಿಮೆಣಸು ಗಿಡಗಳಿಗೆ ಹಾನಿ ಮಾಡಿದ್ದು, ಭಾರೀ ನಷ್ಟ ಉಂಟು ಮಾಡಿವೆ. ಮತ್ತೊಂದೆಡೆ ಪಂಜೇರಿರ ಹರೀಶ್, ಮಾಳೆಯಂಡ ಅಯ್ಯಪ್ಪ, ಜಯ ಅವರುಗಳ ತೋಟಗಳಿಗೂ ನುಗ್ಗಿ ಬೆಳೆ ಹಾನಿಗೊಳಿಸಿವೆ.