ಮಡಿಕೇರಿ, ನ, 8: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಭಾಗಮಂಡಲ ಹೋಬಳಿ ಘಟಕ, ಕರಿಕೆ ರಾಷ್ಟ್ರೀಯ ಹಬ್ಬಾಚರಣಾ ಸಮಿತಿ ಆಶ್ರಯದಲ್ಲಿ ತಾ.28ರಂದು ಗಡಿಗ್ರಾಮ ಕರಿಕೆಯಲ್ಲಿ ನಡೆಯಲಿರುವ ಒಂಬತ್ತನೇ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ಕಲಾವಿದೆ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಆಯ್ಕೆಯಾಗಿದ್ದಾರೆ.ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಅವರ ಅಧ್ಯಕ್ಷತೆಯಲಿ,್ಲ ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶೋಭಾಸುಬ್ಬಯ್ಯ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಮಹಿಳೆಯರಿಗೆ ಆದ್ಯತೆ ನೀಡಬೇಕೆಂಬ ಇರಾದೆ ಯೊಂದಿಗೆ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಈ ಪೈಕಿ ಶೋಭಾ ಅವರು ಆಯ್ಕೆಯಾಗಿದ್ದಾರೆ.

ಸಮ್ಮೇಳನ ಸಂಬಂಧ ಹಬ್ಬಾ ಚರಣಾ ಸಮಿತಿ ಸಹಯೋಗ ದೊಂದಿಗೆ ಎಲ್ಲ

(ಮೊದಲ ಪುಟದಿಂದ) ಉಪ ಸಮಿತಿಗಳನ್ನು ರಚಿಸಲಾಗಿದ್ದು, ಪೂರ್ವ ಸಿದ್ಧತೆಗಳು ನಡೆಯುತ್ತಿವೆ.

ಸಭೆಯಲ್ಲಿ ಗೌರವ ಕಾರ್ಯದರ್ಶಿ ಗಳಾದ ಕೂಡಕಂಡಿ ದಯಾನಂದ, ಬಾಳೆಯಡ ಕಿಶನ್ ಪೂವಯ್ಯ, ಪದಾಧಿಕಾರಿಗಳಾದ ಕೋಡಿ ಚಂದ್ರಶೇಖರ್, ಡಿ.ಹೆಚ್. ಪುಷ್ಟ , ಪರ್ಲಕೋಟಿ ಸುನಿತಾ, ಭಾರತೀ ರಮೇಶ್, ಹರೀಶ್ ಸರಳಾಯ, ಪ್ರಭು ರೈ ಇನ್ನಿತರರು ಪಾಲ್ಗೊಂಡಿದ್ದರು.