ಸಿದ್ದಾಪುರ, ನ. 8: ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಸಿ.ಪಿ.ಐ.ಎಂ ಮುಖಂಡ ಡಾ.ಐ.ಆರ್ ದುರ್ಗಾಪ್ರಸಾದ್ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರವು ನೋಟು ಅಮಾನ್ಯೀಕರಣಗೊಳಿಸಿ ಇಂದಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಿಪಿಐಎಂ ಪಕ್ಷದ ಕಾರ್ಯಕರ್ತರು ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕರಾಳ ದಿನಾಚರಣೆಯ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಪಕ್ಷದ ಮುಖಂಡರುಗಳಾದ ಎನ್.ಡಿ ಕುಟ್ಟಪ್ಪ, ಹೆಚ್.ಬಿ. ರಮೇಶ್, ಮಹೇಶ್, ಅನಿಲ್ ಮತ್ತಿತರರು ಹಾಜರಿದ್ದರು.