ಮಡಿಕೇರಿ, ನ. 9: ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಶಿಶುಕಲ್ಯಾಣ ಸಂಸ್ಥೆಯ ಮಕ್ಕಳಿಗೆ ಪ್ರವಾಸ ಆಯೋಜಿಸಲಾಗಿತ್ತು.

ಮಡಿಕೇರಿಯಿಂದ 19 ಕಿ.ಮೀ. ದೂರದ ಮಾಂದಲಪಟ್ಟಿಗೆ ಬಾಲಭವನದ 26 ಮಕ್ಕಳನ್ನು ಕರೆದೊಯ್ದು ಪ್ರಕೃತಿ ನಡುವೇ ಮಕ್ಕಳಿಗೆ ವೈವಿಧ್ಯಮಯ ಸ್ಪರ್ಧೆ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿತ್ತು. ಪರಿಸರದ ಅಗತ್ಯತೆ, ನಿಸರ್ಗದ ಸಂರಕ್ಷಣೆಯ ಮಾಹಿತಿ ಯನ್ನೂ ಈ ಸಂದರ್ಭ ಮಕ್ಕಳಿಗೆ ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರು ನೀಡಿದರು. ಮಡಿಕೇರಿಯ ಅರುಣ ಸ್ಟೋರ್ಸ್ ಮಾಲೀಕ ಅರುಣ್ ಮಕ್ಕಳಿಗೆ ಗಾಳಿಪಟ ಹಾರಿಸುವ ಸ್ಪರ್ಧೆ ಆಯೋಜಿಸಿದ್ದರು. ಮಾಂದಲಪಟ್ಟಿಯ ಗುಡ್ಡದ ಮೇಲೆ ಮಕ್ಕಳು ಗಾಳಿಪಟ ಹಾರಿಸಿ ಸಂಭ್ರಮಿಸಿದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಹೆಚ್.ಟಿ., ಶಿಶು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಕಲ್ಮಾಡಂಡ ಮೋಹನ್ ಮೊಣ್ಣಪ್ಪ, ರೋಟರಿ ಮಿಸ್ಟಿ ಹಿಲ್ಸ್ ಖಜಾಂಚಿ ಮೋಹನ್ ಪ್ರಭು, ಸಮುದಾಯ ಸೇವಾ ಯೋಜನೆ ನಿರ್ದೆರೂ.ಶಕಿ ಶಶಿ ಮೊಣ್ಣಪ್ಪ, ಪಶ್ಚಿಮಘಟ್ಟ ಮೂಲ ನಿವಾಸಿಗಳ ವಿಮೋಚನಾ ಸಂಘಟನೆಯ ಕಾಳಚಂಡ ರವಿ ತಮ್ಮಯ್ಯ, ಮಿಸ್ಟಿ ಹಿಲ್ಸ್ ನಿರ್ದೇಶಕರು, ಸದಸ್ಯರು, ಶಿಶು ಕಲ್ಯಾಣ ಸಂಸ್ಥೆಯ ನಿರ್ದೇಶಕರಾದ ನಮಿತಾ ರೈ, ಶಫಾಲಿ ರೈ, ಲಯನ್ಸ್ ಕ್ಲಬ್‍ನ ಪ್ರತಿಮಾರವಿ, ಅಂಬೆಕಲ್ ಸುಶೀಲಾ ಕುಶಾಲಪ್ಪ ಪಾಲ್ಗೊಂಡಿದ್ದರು.