ನಾಪೆÉÇೀಕ್ಲು, ನ. 11: ಪಾರಾಣೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾರ್ಯನಿರ್ವಣಾಧಿಕಾರಿಯಾಗಿ ಸುಮಾರು 39 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ನಾಯಕಂಡ ಗೌರಿ ಕುಶಾಲಪ್ಪ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.ಸಂಘದ ಅಧ್ಯಕ್ಷ ಬೊಳಕಾರಂಡ ಮಂದಣ್ಣ ಸನ್ಮಾನಿಸಿದರು. ಈ ಸಂದರ್ಭ ಸಂಘದ ಸದಸ್ಯರಾದ ಎ.ಎಂ. ಪೂಣಚ್ಚ, ಪಿ.ಎ. ಪೆಮ್ಮಯ್ಯ, ಕೆ.ಎ. ಅಪ್ಪಣ್ಣ, ಕೆ.ಡಿ. ಪೆಮ್ಮಯ್ಯ, ಎನ್.ಸಿ. ಚಂಗಪ್ಪ, ಬಿ.ಜಿ. ಕುಟ್ಟಯ್ಯ, ಹೆಚ್.ಎಸ್. ರಾಜು, ಸಿ.ಎ. ಸ್ವಾತಿ, ಬಿ.ಎಸ್. ಜಯಂತಿ ಇದ್ದರು.