ಮಡಿಕೇರಿ, ನ. 13: ಕೊಡಗು ಪ್ರಬುದ್ಧ ನೌಕರರ ಒಕ್ಕೂಟದ ವತಿಯಿಂದ ತಾ. 14ರಂದು (ಇಂದು) ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಶಾಲಾ ಪ್ರವೇಶ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಡಿಕೇರಿಯ ಅಶೋಕಪುರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸಂಜೆ 5.30 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.