ಗೋಣಿಕೊಪ್ಪ ವರದಿ, ನ. 12: 11 ದಿನ ಪೂರೈಸಿದ ಪೊನ್ನಂಪೇಟೆ ತಾಲೂಕು ರಚನೆ ಹೋರಾಟಕ್ಕೆ ಪೊನ್ನಂಪೇಟೆಯ ಕುಂದ ರಸ್ತೆಯಲ್ಲಿರುವ ಕೊಡವ ಕೂಟ, ಎನ್‍ಎನ್‍ಡಿಪಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರುಗಳು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಕೊಡವ ಕೂಟ ಅಧ್ಯಕ್ಷ ಪೆಮ್ಮಂಡ ಶೌರಿ ಪ್ರಸಾದ್, ಪ್ರಮುಖರುಗಳಾದ ಕಡೇಮಾಡ ಕುಸುಮ, ಚಿಮ್ಮಣಮಾಡ ವಾಸು ಉತ್ತಪ್ಪ, ಅಣ್ಣಳಮಾಡ ದೇವಯ್ಯ, ಕಾಳಿಮಾಡ ಪೊನ್ನಪ್ಪ, ಬಾಚಮಾಡ ಚಿಣ್ಣಪ್ಪ, ಅಪ್ಪೇಂಗಡ ಸೋಮಯ್ಯ, ಕಡೇಮಾಡ ದಿಲಿಪ್ ಪಾಲ್ಗೊಂಡರು.

ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ರುದ್ರಪ್ಪ, ಹೋಬಳಿ ಅಧ್ಯಕ್ಷ ಪುಟ್ಟಸ್ವಾಮಿ, ಪ್ರಮುಖರುಗಳಾದ ಸುರೇಶ್, ಕಾರ್ಯದರ್ಶಿ ರಾಜೇಶ್, ಖಜಾಂಜಿ ಯೋಗೇಶ್, ಎಸ್‍ಎನ್‍ಡಿಪಿ ಅಧ್ಯಕ್ಷ ದಿಲಿಪ್, ಕಾರ್ಯದರ್ಶಿ ವಿನು, ಮಹಿಳಾ ಘಟಕ ಅಧ್ಯಕ್ಷೆ ಸಜಿತಾ, ಜಯಂತಿ, ಭಗವತಿ ಸ್ವಸಹಾಯ ಸಂಘದ ಪ್ರಮುಖರುಗಳಾದ ರುದ್ರಪ್ಪ, ರಾಜೇಶ್, ಯೋಗೇಶ್ ಇವರುಗಳು ಪಾಲ್ಗೊಂಡು ಒತ್ತಾಯಿಸಿದರು.