ಮಡಿಕೇರಿ, ನ. 14: ನಗರ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿ ನಡೆದ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಅಭಿಯಾನ ನಡೆಯಿತು.

ಕನ್ನಿಕಾ ಲೇಔಟ್‍ನಿಂದ ಡೈರಿ ಫಾರಂ, ಐ.ಟಿ.ಐ. ಜಂಕ್ಷನ್, ಕಾನ್ವೆಂಟ್ ಜಂಕ್ಷನ್, ಫೀ.ಮಾ. ಕಾರ್ಯಪ್ಪ ಕಾಲೇಜು ಹಿಂಭಾಗ, ವಿದ್ಯಾನಗರ ಸೇರಿದಂತೆ ವಿವಿಧೆಡೆ ಕಾಂಗ್ರೆಸ್ ನಡಿಗೆ ನಡೆಸಿದ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಕಿರು ಹೊತ್ತಿಗೆಯನ್ನು ಸಾರ್ವಜನಿಕರಿಗೆ ನೀಡಿದರು. ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮಾಜಿ ಸದಸ್ಯರಾದ ಟಿ.ಯಂ. ಅಯ್ಯಪ್ಪ, ಸುನಿಲ್ ನಂಜಪ್ಪ, ಫಿಲೋಮಿನ, ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ, ನಗರಸಭಾ ಸದಸ್ಯರಾದ ತಜಸುಂ, ಪ್ರಕಾಶ್ ಆಚಾರ್ಯ, ಜುಲೇಕಾಬಿ, ಕಾರ್ಯದರ್ಶಿ ಪ್ರಭು ರೈ, ಪ್ರಮುಖರಾದ ಟಿ.ವಿ. ನಾಣಯ್ಯ, ಇಬ್ರಾಹಿಂ, ಇಸ್ಮಾಯಿಲ್ ಮಹಮ್ಮದ್, ಚಂದ್ರಶೇಖರ್, ಯೂಸುಫ್, ಸದಾ ಮುದ್ದಪ್ಪ, ಇಸ್ಮಾಯಿಲ್, ಜಫರ್ ಉಲ್ಲಾ, ಮುನೀರ್, ಸುಧಾಯ್ ನಾಣಯ್ಯ, ಎಂ.ಎಂ. ಹನೀಫ್, ಉಸ್ಮಾನ್ ಮೊದಲಾದವರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.