ಮಡಿಕೇರಿ, ನ. 14: ಕುಶಾಲನಗರದಲ್ಲಿ ಇತ್ತೀಚೆಗೆ ಆಟೋದಲ್ಲಿ ಪ್ರಯಾಣಿಸಿದವರಾರೋ ಚಿನ್ನಾಭರಣಗಳಿದ್ದ ಬ್ಯಾಗ್ ಅನ್ನು ಆಟೋದಲ್ಲೇ ಬಿಟ್ಟು ಹೋಗಿದ್ದಾರೆ. ಆಟೋದಲ್ಲಿ ದೊರೆತ ಈ ಆಭರಣವನ್ನು ಆಟೋ (ಕೆಎ 12 ಬಿ 4126) ಚಾಲಕ ಧ್ರುವಕುಮಾರ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. 22.10.2017 ರಂದು ಈ ಘಟನೆ ನಡೆದಿದ್ದು, ಈತನಕ ಇದರ ವಾರಸುದಾರರು ಪತ್ತೆಯಾಗಿಲ್ಲ. ಅಲ್ಲದೆ ಪೊಲೀಸ್ ದೂರನ್ನು ದಾಖಲಿಸಿಲ್ಲ.

ಈ ಮಾಲನ್ನು ವಿಲೇವಾರಿ ಮಾಡಬೇಕಿರುವ ಹಿನ್ನೆಲೆಯಲ್ಲಿ ಪೊಲೀಸರು ಆಭರಣ ಕಳೆದುಕೊಂಡಿರುವವರು ಠಾಣಾಧಿಕಾರಿ 9480804951 ಅಥವಾ ಪೊಲೀಸ್ ಠಾಣೆ 08276-274333ಅನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ. ವಾರಸುದಾರರು ಬಾರದಿದ್ದಲ್ಲಿ ನ್ಯಾಯಾಲಯದ ಅನುಮತಿ ಪಡೆದು ಹರಾಜು ನಡೆಸಬೇಕಾಗಿದೆ.