ಮಡಿಕೇರಿ, ನ. 17: ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಅಸಹಜ ಸಾವಿನ ಪ್ರಕರಣ ಸಂಬಂಧ ತನಿಖೆಗೆ ಆಗಮಿಸುವದರೊಂದಿಗೆ ಐದು ದಿನಗಳಿಂದ ಜಿಲ್ಲೆಯ ವಿವಿಧೆಡೆಗಳಲ್ಲಿ ಮಾಹಿತಿ ಕಲೆ ಹಾಕುತ್ತಿದ್ದ ಸಿಬಿಐ ತಂಡ ಇಲ್ಲಿಂದ ನಿರ್ಗಮಿಸಿರುವದಾಗಿ ತಿಳಿದು ಬಂದಿದೆ.

ನವದೆಹಲಿಯ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರ ಸಹಿತ ಚೆನ್ನೈ ಕೇಂದ್ರ ತನಿಖಾ ದಳ ತಂಡದ ಸದಸ್ಯರು ಪೊಲೀಸ್ ಅಧಿಕಾರಿಯ ಸಾವಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸುತ್ತಿದ್ದರು. ನಿನ್ನೆ ಕೂಡ ಸಾಕಷ್ಟು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಸಿಬಿಐ ತಂಡ ಆ ಬಳಿಕ ಇಲ್ಲಿಂದ ನಿರ್ಗಮಿಸಿದೆ. ಅಲ್ಲದೆ ಎಂ.ಕೆ. ಗಣಪತಿ ಸಾವಿಗೆ ಸಂಬಂಧಿಸಿದಂತೆ ಸಿಬಿಐ ತನಿಖಾ ದಳ ತೆಗೆದುಕೊಳ್ಳಲಿರುವ ಮುಂದಿನ ನಡೆ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.