ಭಾಗಮಂಡಲ, ನ. 17: ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್‍ನಡಿ ಇಲ್ಲಿ ಕುಂದಚೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರೂ. 38 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ 12 ಕಾಂಕ್ರಿಟ್ ರಸ್ತೆ ಕಾಮಗಾರಿಗಳಿಗೆ ಭಾಗಮಂಡಲದಲ್ಲಿ 49 ಲಕ್ಷ ಹಾಗೂ ಅಯ್ಯಂಗೇರಿಯಲ್ಲಿ 42 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು. ಈ ಸಂದರ್ಭ ಕುಂದಚೇರಿ ಗ್ರಾ.ಪಂ. ಅಧ್ಯಕ್ಷ ಜಯಪ್ರಕಾಶ್, ಉಪಾಧ್ಯಕ್ಷೆ ಸಿ.ಆರ್. ವೀಣಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಉಸ್ತುವಾರಿ ಸಚಿವರ ಆಪ್ತ ಸಹಾಯಕ ಹರೀಶ್ ಬೋಪಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್, ಹನೀಪ್ ಸಂಪಾಜೆ, ಕೆದಂಬಾಡಿ ರಘುನಾಥ್, ಕೆದಂಬಾಡಿ ರಮೇಶ್, ಕೆ.ಬಿ. ಸುರೇಂದ್ರ, ಕೆ.ಎಂ. ಇಸ್ಮಾಯಿಲ್, ಸುನಿಲ್ ಭಾಗಮಂಡಲ, ದೇವಂಗೋಡಿ ಹರ್ಷ, ರವೀಂದ್ರ ಹೆಬ್ಬಾರ್, ನೆರವಂಡ ಉಮೇಶ್, ಟಿ.ಎಂ. ಸಾದುಲಿ, ಕೆದಂಬಾಡಿ ವಿಶ್ವನಾಥ್, ಕಾಡಂಡ ಭೀಮಯ್ಯ, ಮಂಗೇರಿರ ಸೋಮಯ್ಯ, ಅಬ್ದುಲ್ ಲತೀಫ್, ಕೆದಂಬಾಡಿ ಕಿಶೋರ್ ಕುಮಾರ್, ನಾಳಿಯಂಡ ಚಂಗಪ್ಪ, ನೇತ್ರಾವತಿ, ರುಕ್ಮಿಣಿ, ಕೆದಂಬಾಡಿ ಜಯಪ್ರಕಾಶ್, ಬಿ.ಎನ್. ರಂಗಪ್ಪ, ಸಾರ್ವಜನಿಕರು ಹಾಜರಿದ್ದರು.