ಮಡಿಕೇರಿ, ನ. 19: ಮೈಸೂರಿನಲ್ಲಿ ತಾ. 24ರಿಂದ 26ರವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಮೂವರು ಆಯ್ಕೆಯಾಗಿದ್ದಾರೆ.

ಸಮ್ಮೇಳನದಲ್ಲಿ ಹಿರಿಯ ಸಾಹಿತಿಗಳನ್ನು ಸನ್ಮಾನಿಸಲಾಗುತ್ತಿದ್ದು, ಸನ್ಮಾನಿತರಾಗಿ ಜಿಲ್ಲೆಯಿಂದ ಶಿಕ್ಷಕಿ, ಸಾಹಿತಿ ಕಸ್ತೂರಿ ಗೋವಿಂದಮಯ್ಯ ಅವರು ಆಯ್ಕೆಯಾಗಿದ್ದಾರೆ.

ಕವಿಗೋಷ್ಠಿಗೆ ಕುಶಾಲನಗರದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಹಾಗೂ ಮಡಿಕೇರಿಯ ಶಕ್ತಿ ಪತ್ರಿಕೆ ಉಪ ಸಂಪಾದಕ ಕುಡೆಕಲ್ ಸಂತೋಷ್ ಅವರುಗಳು ಆಯ್ಕೆಯಾಗಿದ್ದಾರೆ. ತಾ. 25ರಂದು ಸನ್ಮಾನ ಕಾರ್ಯಕ್ರಮ ಹಾಗೂ ಕವಿಗೋಷ್ಠಿ ನಡೆಯಲಿದ್ದು, ಈ ಮೂವರು ಪಾಲ್ಗೊಳ್ಳಲಿದ್ದಾರೆ.