ಮಡಿಕೇರಿ, ನ. 19: ಅಶೋಕಪುರದ ಸಂತೋಷ್ ಯುವಕ ಸಂಘ, ಕೊಡಗು ಪ್ರಬುದ್ಧ ನೌಕರರ ಒಕ್ಕೂಟ ಹಾಗೂ ಬಿದರಳ್ಳಿ ಈಸ್ಟ್ ಪಾಯಿಂಟ್ ಆಸ್ಪತ್ರೆ ಇವರ ಸಹಯೋಗದಲ್ಲಿ ತಾ. 26ರಂದು ನಗರದ ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

ಹೃದ್ರೋಗ ಸಮಸ್ಯೆ, ಮಕ್ಕಳ ಚಿಕಿತ್ಸೆ, ಕೀಲು ಮೂಳೆ ಸಮಸ್ಯೆ, ಸ್ತ್ರೀ ತಜ್ಞರು- ಪ್ರಸೂತಿ ಚಿಕಿತ್ಸೆ, ವೈದ್ಯಕೀಯ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಹೃದಯ ತಪಾಸಣೆ ವೇಳೆ ಆನ್‍ಜಿಯೋಗ್ರಾಮ್ ಹಾಗೂ ಆನ್‍ಜಿಯೋಪ್ಲಾಸ್ಟ್ ಅವಶ್ಯಕತೆ ಇದ್ದಲ್ಲಿ ಬೆಂಗಳೂರಿನ ಈಸ್ಟ್ ಪಾಯಿಂಟ್ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ 9448720318 ಅಥವಾ 9481114536ನ್ನು ಸಂಪರ್ಕಿಸಬಹುದು.