ಕುಶಾಲನಗರ, ನ. 19: ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ಎರಡು ದಿನಗಳ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಕುಶಾಲನಗರದಲ್ಲಿ ಚಾಲನೆ ನೀಡಲಾಯಿತು.

8ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ 5 ದಿನಗಳ ಉತ್ತರಾಖಂಡ್ ಜಿಲ್ಲೆ ಪ್ರವಾಸ ಕಾರ್ಯಕ್ರಮಕ್ಕೆ ಸ್ಥಳೀಯ ಸರಕಾರಿ ಪ್ರೌಢಶಾಲಾ ಬಳಿ ತಾಲೂಕು ಪಂಚಾಯಿತಿ ಸದಸ್ಯ ಡಿ.ಎಸ್. ಗಣೇಶ್ ಚಾಲನೆ ನೀಡಿದರು.

ಮೂರು ಹಂತದಲ್ಲಿ ತಾಲೂಕಿನಿಂದ 331 ವಿದ್ಯಾರ್ಥಿ ಗಳಿಗೆ ಉಚಿತ ಪ್ರವಾಸ ಹಮ್ಮಿ ಕೊಳ್ಳಲಾಗಿದೆ. ಈ ಸಂದರ್ಭ ಡಯಟ್ ಉಪನ್ಯಾಸಕ ಮಲ್ಲೇಸ್ವಾಮಿ, ಪ್ರವಾಸ ಕಾರ್ಯಕ್ರಮದ ತಾಲೂಕು ನೋಡೆಲ್ ಅಧಿಕಾರಿ ಕೆ.ಮೂರ್ತಿ, ಶಿಕ್ಷಕರಾದ ಟಿ.ಜಿ. ಪ್ರೇಮ್‍ಕುಮಾರ್, ಉ.ರಾ. ನಾಗೇಶ್, ಮಾಲಾದೇವಿ ಮತ್ತಿತರರು ಇದ್ದರು.