ಕುಶಾಲನಗರ, ನ. 19: ಕುಶಾಲನಗರದಿಂದ ವರ್ಗಾವಣೆಗೊಂಡ ಡಿವೈಎಸ್ಪಿ ಸಂಪತ್ ಕುಮಾರ್ ಅವರನ್ನು ಕೂಡ್ಲೂರು ಸಾರ್ವಜನಿಕರು ಸನ್ಮಾನಿಸಿ ಗೌರವಿಸಿದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಡಿವೈಎಸ್ಪಿ ಸಂಪತ್ ಕುಮಾರ್ ಅವರನ್ನು ಸ್ಥಳೀಯ ಪ್ರಮುಖರಾದ ಕಿರಣ್, ವರದ, ಎಂ.ಡಿ. ಕೃಷ್ಣಪ್ಪ ಮತ್ತಿತರರು ಸನ್ಮಾನಿಸಿದರು. ಈ ಸಂದರ್ಭ ಗ್ರಾಮಾಂತರ ಠಾಣಾಧಿಕಾರಿ ಜೆ.ಇ. ಮಹೇಶ್, ಪ್ರಮುಖರಾದ ಕೇಶವ ರೈ, ಆರ್.ಕೆ. ಕೃಷ್ಣ, ಕೂಡಿಗೆ ಗ್ರಾ.ಪಂ. ಉಪಾಧ್ಯಕ್ಷ ಕೆ.ಟಿ. ಗಿರೀಶ್, ಕೂಡುಮಂಗಳೂರು ಗ್ರಾ.ಪಂ. ಸದಸ್ಯರಾದ ಸುರೇಶ್, ಗಣೇಶ್, ಚೇತನ್ ಮತ್ತಿತರರು ಇದ್ದರು.