ಶನಿವಾರಸಂತೆ, ನ. 19: ಶನಿವಾರಸಂತೆ ಹೋಬಳಿ ಜೆಡಿಎಸ್ ಸಮಾವೇಶ ಪೂರ್ವಭಾವಿ ಸಭೆ ಶನಿವಾರಸಂತೆ ಪ್ರವಾಸಿ ಮಂದಿರದ ಬಳಿ ಜೆಡಿಎಸ್ ಮಡಿಕೇರಿ ವಿಧಾನಸಭಾ ಅಧ್ಯಕ್ಷ ಹೆಚ್.ಎಸ್. ಸುರೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ ಮಡಿಕೇರಿ ಕ್ಷೇತ್ರದ ಎಂ.ಎಲ್.ಎ. ಚುನಾವಣೆಯಲ್ಲಿ ಜೀವಿಜಯ ಜಯ ಸಾಧಿಸುವದು ಬಹುತೇಕ ಖಚಿತ. ಚುನಾವಣೆಯ ವ್ಯವಸ್ಥೆ ಮೈಲಿಗೆಯಾಗಿದೆ. ರಾಷ್ಟ್ರೀಯ ಪಕ್ಷಗಳು ಚುನಾವಣೆಯನ್ನು ಮೈಲಿಗೆ ಮಾಡಿವೆ. ನಾವು ಈ ಚುನಾವಣೆ ಯನ್ನು ವೈಜ್ಞಾನಿಕವಾಗಿ ಎದುರಿಸಬೇಕಿದೆ ಎಂದರು.

ಕೆ.ಎಂ. ಗಣೇಶ್, ಮುತ್ತುಗೌಡ, ಅದಿಲ್ ಪಾಷ, ಡಿ.ಪಿ. ಬೋಜಪ್ಪ, ಎ.ಎಂ. ಆನಂದ್, ಬಿಜೆಪಿ ಕೋಮುವಾದ ಪಕ್ಷ ನಮಗೆ ಬೇಕಿಲ್ಲ. ನಮ್ಮಲ್ಲಿ ಒಗ್ಗಟ್ಟಿದ್ದರೆ ಜಿಲ್ಲೆಯ 2 ಸ್ಥಾನಗಳನ್ನು ಪಡೆಯಬಹುದು ಎಂದರು.

ಸಭೆಯಲ್ಲಿ ಪ್ರಮುಖರಾದ ಎ.ಜೆ. ವಿಜಯ್, ಅಪ್ಪಸ್ವಾಮಿ, ಜಗನ್‍ಪಾಲ್, ಪುಟ್ಟರಾಜು, ಭಾಸ್ಕರ್, ದೇವಪ್ಪ, ಮೂರ್ತಿ, ನಾಜೂ, ಲತಾ, ಗಿರಿ, ಚಂದ್ರಶೇಖರ್, ಖಧೀರ್, ರಜಾಕ್, ಸುಬ್ರಮಣ್ಯ ಹಾಗೂ ಕಾರ್ಯಕರ್ತರು ಹಾಜರಿದ್ದರು. ಪಾಪಣ್ಣ ಸ್ವಾಗತಿಸಿ, ನಿರೂಪನೆ ಮಾಡಿ ವಂದಿಸಿದರು.