ಗೋಣಿಕೊಪ್ಪ ವರದಿ, ನ. 19: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲವು ದಶಕಗಳಿಂದ ಕನ್ನಡಕ್ಕಾಗಿ ಸೇವೆ ಸಲ್ಲಿಸುತ್ತಿರುವ ‘ಶಕ್ತಿ’ಯ ಪ್ರಧಾನ ಸಂಪಾದಕರೂ, ಹಿರಿಯ ಪತ್ರಕರ್ತರಾದ ಜಿ. ರಾಜೇಂದ್ರ ಅವರಿಗೆ ವಿಶೇಷ ಗೌರವಾರ್ಪಣೆ ನಡೆಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.

ಸಾಹಿತ್ಯಾ ಕ್ಷೇತ್ರದಲ್ಲಿ ಚೇಂದ್ರಿಮಾಡ ಗ. ಮುತ್ತಪ್ಪ, ಕ್ರೀಡಾಪಟು ವಿ.ಆರ್. ರಘುನಾಥ್, ಶಿಕ್ಷಣದಲ್ಲಿ ಮುಕ್ಕಾಟೀರ ಪುನೀತ್ ಕುಟ್ಟಯ್ಯ, ಕೃಷಿಯಲ್ಲಿ ಸೋಮೆಯಂಡ ಗಣೇಶ್ ತಿಮ್ಮಯ್ಯ, ಸಮಾಜ ಸೇವೆಯಲ್ಲಿ ಉಂಬಾಯಿ, ಶಿಕ್ಷಣ ಕ್ಷೇತ್ರದಲ್ಲಿ ಉಷಾರಾಣಿ, ವೈದ್ಯಕೀಯದಲ್ಲಿ ಡಾ. ಯತಿರಾಜ್, ಮಹಿಳಾ ಸಬಲೀಕರಣದಲ್ಲಿ ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಯುವ ಪ್ರತಿಭೆ ಕಾರ್ತಿಕ್ ಶೆಣೈ, ಶಿಲ್ಪಕಲೆಯಲ್ಲಿ ಎನ್. ಪಿ. ಕಾವೇರಪ್ಪ, ಸಂಗೀತದಲ್ಲಿ ಚರಣ್‍ರಾಜ್, ಚಲನಚಿತ್ರದಲ್ಲಿ ಫಯಾಜ್ ಖಾನ್, ಛಾಯಾಚಿತ್ರದಲ್ಲಿ ಶಿವಣ್ಣ, ಜಾನಪದದಲ್ಲಿ ಬೆಸೂರು ಶಾಂತೇಶ್, ಮಾಧ್ಯಮ ಕ್ಷೇತ್ರದಲ್ಲಿ ವಿಜಯವಾಣಿ ಹಿರಿಯ ವರದಿಗಾರ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರುಗಳನ್ನು ಸನ್ಮಾನಿಸಲಾಯಿತು.