ವೀರಾಜಪೇಟೆ, ನ. 19: ಸುಣ್ಣದ ಬೀದಿಯಲ್ಲಿರುವ ಸುಬ್ರಹ್ಮಣ್ಯ ಯುವತಿ ಮಂಡಳಿಯಿಂದ ಸ್ಥಾಪಿಸಲಾದ ಕೌಶಲ್ಯಾಭಿವೃದ್ಧಿ ಹೊಲಿಗೆ ತರಬೇತಿಯನ್ನು ಉದ್ಘಾಟನೆ ಮಾಡಲಾಯಿತು.ಯುವತಿ ಮಂಡಳಿಯ ಅಧ್ಯಕ್ಷೆ ಎ.ಎ. ಗೌರಮ್ಮ ಮಾತನಾಡಿ, ಕೌಶಲ್ಯಾಭಿವೃದ್ಧಿ ಯೋಜನೆ ಸೌಲಭ್ಯವನ್ನು ಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಬೇಕು, ಇದರಿಂದ ಸ್ವಾವಲಂಬನೆಯ ಜೀವನ ನಡೆಸಲು ಸಾಧ್ಯ ಎಂದರು.ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಎನ್.ಎಸ್. ಕಂದಾ ಹಾಗೂ ತರಬೇತಿ ಸದಸ್ಯರುಗಳು ಹಾಜರಿದ್ದರು.