ಮಡಿಕೇರಿ, ನ. 20: ಕಳೆದ ಹಲವು ಸಮಯಗಳಿಂದ ಪಾಶ್ರ್ವವಾಯು ಪೀಡಿತರಾಗಿ ಸಂಕಷ್ಟದಲ್ಲಿರುವ ಮಕ್ಕಂದೂರಿನ ನಿವಾಸಿ ಪಿ.ಟಿ. ರಾಮಚಂದ್ರ ಅವರಿಗೆ ಮಡಿಕೇರಿ ಎಸ್.ಎನ್.ಡಿ.ಪಿ. ವತಿಯಿಂದ ರೂ. 5 ಸಾವಿರ ಧನ ಸಹಾಯ ನೀಡಲಾಯಿತು. ಎಸ್.ಎನ್.ಡಿ.ಪಿ. ಮಡಿಕೇರಿ ಅಧ್ಯಕ್ಷ ವಾಸುದೇವ, ಉಪಾಧ್ಯಕ್ಷ ಮಾಧವ, ಪ್ರಮುಖರಾದ ಗಂಗಾಧರನ್, ಸುಲೋಚನಾ ಅವರುಗಳು ಸಹಾಯಧನದ ಚೆಕ್‍ನ್ನು ವಿತರಿಸಿದರು.