ಕುಶಾಲನಗರ, ನ. 20: ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡು ನೂತನ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಸರಣಿ ಧರಣಿಯಲ್ಲಿ ಕುಶಾಲನಗರ ಪಟ್ಟಣದ 11ನೇ ವಾರ್ಡ್‍ನ ನಾಗರೀಕರು ಪಾಲ್ಗೊಂಡಿದ್ದರು.ಸ್ಥಳೀಯ ಕಾರು ನಿಲ್ದಾಣದ ಗುಂಡುರಾವ್ ಸತ್ಯಾಗ್ರಹ ವೇದಿಕೆಯಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರಾದ ಹೆಚ್.ಎಂ.ಮಧುಸೂದನ್ ನೇತೃತ್ವದಲ್ಲಿ ಧರಣಿ ನಡೆಯಿತು.