ಮಡಿಕೇರಿ, ನ. 20: ಕುಮಟೂರು ಬಾಡಗ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕುವಂತೆ ಹೇರ್ಮಾಡು ಶ್ರೀ ಈಶ್ವರ ದೇವಸ್ಥಾನ ಸಮಿತಿ ಜಿಲ್ಲಾ ಅಬ್ಕಾರಿ ಅಧೀಕ್ಷಕರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.

ಶ್ರೀಮಂಗಲ ನಾಡು ಕೆ. ಬಾಡಗ ಗ್ರಾಮ ಮತ್ತು ಕುಮಟೂರು ಗ್ರಾಮದ ಕೆಲವು ಅಂಗಡಿ ಹಾಗೂ ಕೆಲವು ಮನೆಗಳಲ್ಲಿ ಅಕ್ರಮವಾಗಿ ಸಾರಾಯಿ ದಂಧೆ ನಡೆಯುತ್ತಿದ್ದು, ಈ ಬಗ್ಗೆ ಅಬ್ಕಾರಿ ಇಲಾಖೆ ಗಮನ ಹರಿಸಿ ಅಕ್ರಮ ಸಾರಾಯಿ ದಂಧೆಗೆ ಕಡಿವಾಣ ಹಾಕುವಂತೆ ಮನವಿಯಲ್ಲಿ ಆಗ್ರಹಿಸಿದೆ.