ಸಿದ್ದಾಪುರ, ನ. 21: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚೆನ್ನಯ್ಯನಕೋಟೆ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿ ಅವರ ಅನುದಾನದಲ್ಲಿ ಚೆನ್ನಯ್ಯನಕೋಟೆ ಪಟ್ಟಣದಲ್ಲಿ ನೂತನ ಬಸ್ ತಂಗುದಾಣವನ್ನು ಕಾಂಗ್ರೆಸ್ ಪಕ್ಷದ ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಪಿ.ಸಿ. ಹಸೈನಾರ್ ಹಾಜಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಲೀಲಾವತಿ, ಗ್ರಾ.ಪಂ. ಅಧ್ಯಕ್ಷೆ ಗೀತಾ, ತಾ.ಪಂ. ಸದಸ್ಯರುಗಳಾದ ಚಿನ್ನಮ್ಮ, ಕಾವೇರಮ್ಮ, ಗ್ರಾ.ಪಂ. ಸದಸ್ಯರಾದ ವಿಜು, ಉಮೇಶ, ಜಿ.ಪಂ. ಮಾಜಿ ಸದಸ್ಯ ಹೆಚ್.ಸಿ. ಸಣ್ಣಯ್ಯ, ಹೆಚ್.ಎಸ್. ಯೋಗೇಶ್ ಶಾಲಾಭಿವೃದ್ಧಿ ಅಧ್ಯಕ್ಷ ದಿನೇಶ್, ಹಾಗೂ ರಫೀಕ್, ಹುರೈನ್, ನೌಫಲ್, ರವಿ, ಇತರರು ಹಾಜರಿದ್ದರು.