ಸೋಮವಾರಪೇಟೆ, ನ. 21: ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಪ್ರತಿ ಮನೆಗೆ ಮಾಹಿತಿ ನೀಡುವ ಮನೆ ಮನೆಗೆ ಕಾಂಗ್ರೆಸ್ ಅಭಿಯಾನ ಸಮೀಪದ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಟಿ.ಎ. ಸುರೇಶ್ ಸೇರಿದಂತೆ ಇತರರು ಬೆಟ್ಟದಳ್ಳಿ, ಕುಮಾರಳ್ಳಿ ಭಾಗದ ಮನೆಮನೆಗೆ ತೆರಳಿ ಕಾಂಗ್ರೆಸ್ ಸರ್ಕಾರದ ಯೋಜನೆಗಳ ಮಾಹಿತಿ ನೀಡಿದರು. ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಜೆ.ಎಲ್. ಜನಾರ್ಧನ್, ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಎನ್. ಹೂವಯ್ಯ, ಕಾಳಪ್ಪ, ಶಾಂತಳ್ಳಿ ಬೂತ್ ಅಧ್ಯಕ್ಷ ಗಿರೀಶ್ ಸೇರಿದಂತೆ ಇತರರು ಅಭಿಯಾನದಲ್ಲಿ ಭಾಗವಹಿಸಿದ್ದರು. ವೀರಾಜಪೇಟೆ, ನ. 21: ಕಾಂಗ್ರೆಸ್ ಸೇವಾದಳದ ವತಿಯಿಂದ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ಸೇವಾದಳದ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಎಂ.ಎಲ್ ಸೈನುದ್ದೀನ್ ಅವರ ನೇತೃತ್ವದಲ್ಲಿ ಪಂಜರ್‍ಪೇಟೆ, ಸುಭಾಶ್‍ನಗರ ಸಿಲ್ವಾ ನಗರ ಹಾಗೂ ವಿಜಯನಗರ ಬಡಾವಣೆಗಳಲ್ಲಿ ಮನೆ ಮನೆಗೆ ತೆರಳಿದ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಮಾಡಿದ ಸಾಧನಗಳ ಪುಸ್ತಕವನ್ನು ನೀಡಿ ಪ್ರತಿ ಕುಟುಂಬಕ್ಕೆ ಸಾಧನೆಗಳ ಅರಿವು ಮೂಡಿಸಿದರು. ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಕ್ಷದ ನಗರ ಸಮಿತಿ ಅಧ್ಯಕ್ಷ ಜಿ.ಜಿ.ಮೋಹನ್, ಡಿ.ಎಲ್.ಸುಬ್ಬಯ್ಯ, ದಿನೇಶ್, ಅಸ್ಲಾಂ, ಎಚ್.ಕೆ.ಅಪ್ಪಯ್ಯ, ಯುವರಾಜ್ ಕೃಷ್ಣ ಮಹಿಳಾ ಘಟಕದ ಕಾವೇರಮ್ಮ, ತೊರೇರ ಪೊನ್ನಕ್ಕಿ, ಮಿಲನ, ಗಾಯಿತ್ರಿ ನರಸಿಂಹ ಮತ್ತಿತರ ಕಾರ್ಯಕರ್ತರು ಭಾಗವಹಿಸಿದ್ದರು.