ಗೋಣಿಕೊಪ್ಪ ವರದಿ, ನ. 22: ಪಾಲಿಬೆಟ್ಟ ಚೆಶೈರ್ ಹೋಮ್ ಇಂಡಿಯಾ ಕೂರ್ಗ್ ವಿಶೇಷ ಮಕ್ಕಳ ಶಾಲೆಯಲ್ಲಿ ಮೂರ್ನಾಡು ಅಣ್ಣಪ್ಪ ಸ್ವಾಮಿ ನವಜೀವನ ಸ್ವಸಹಾಯ ಪುರುಷರ ಮತ್ತು ಮಹಿಳೆಯರ ಸಂಘದ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ವಿವಿಧ ಕ್ರೀಡಾಕೂಟ ಆಚರಿಸಲಾಯಿತು.

ಕಾರ್ಯಕ್ರಮವನ್ನು ವಿಶೇಷ ಮಕ್ಕಳಿಂದ ಉದ್ಘಾಟಿಸಲಾಯಿತು. ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಯನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಅಣ್ಣಪ್ಪಸ್ವಾಮಿ ನವಜೀವನ ಸ್ವಸಹಾಯ ಪುರುಷರ ಮತ್ತು ಮಹಿಳೆಯರ ಸಂಘದ ಸದಸ್ಯ ದಿನೇಶ್ ಮಾತನಾಡಿ, ಇಂತಹ ವಿಶೇಷ ಮಕ್ಕಳನ್ನು ಪ್ರೊತ್ಸಾಹಿಸಬೇಕು ಮತ್ತು ಮುಖ್ಯವಾಹಿನಿಗೆ ತರುವಂತಹ ಕೆಲಸ ಸಮಾಜ ಮಾಡಬೇಕು ಎಂದರು.

ರೆಡ್ಸ್ ಪ್ಯಾರಡೈಸ್‍ನ ವ್ಯವಸ್ಥಾಪಕ ಪೂರ್ಣಿಮ ಸುರೇಶ್, ಉದ್ಯಮಿ ಸುರೇಶ್ ಮುತ್ತಪ್ಪ, ಅಣ್ಣಪ್ಪಸ್ವಾಮಿ ನವಜೀವನ ಸ್ವಸಹಾಯ ಪುರುಷರ ಮತ್ತು ಮಹಿಳೆಯರ ಸಂಘದ ಅಧ್ಯಕ್ಷ ಮೀರಾ ಸುರೇಶ್, ಪದಾಧಿಕಾರಿಗಳಾದ ಮನೋಜ್, ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್‍ನ ಸದಸ್ಯ ಪುನೀತ ರಾಮಸ್ವಾಮಿ, ಸ್ವಯಂ ಸೇವಕಿ ಲೀನಾ ಮಂದಣ್ಣ ಉಪಸ್ಥಿತರಿದ್ದರು. ಗೀತಾ ನಾಯ್ಡು ನಿರೂಪಿಸಿ, ಸಂಶೀದ ಸ್ವಾಗತಿಸಿದರು, ಶಿವರಾಜ್ ವಂದಿಸಿದರು.