ಚೆಟ್ಟಳ್ಳಿ, ನ. 23: ಚೆಟ್ಟಳ್ಳಿ ವಲಯದ ಆರು ಬೂತುಗಳಲ್ಲಿ ಮನೆ ಮನೆ ಕಾಂಗ್ರೆಸ್ಸಿನ ಅಭಿಯಾನಕ್ಕೆ ಚೆಟ್ಟಳ್ಳಿ ವಲಯ ಅಧ್ಯಕ್ಷ ಪುತ್ತರಿರ ಪಪ್ಪು ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ಚಾಲನೆ ನೀಡಲಾಯಿತು.ಚೆಟ್ಟಳ್ಳಿ ಪಂಚಾಯಿತಿಯ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸಿನ ಹಿರಿಯ ಮುಖಂಡ ಟಿ.ಪಿ. ರಮೇಶ್ ಸಭೆಯನ್ನು ಉದ್ದೇಶಿಸಿ ಕರ್ನಾಟಕದ ಕಾಂಗ್ರೆಸ್ ಸರಕಾರದ ಐದು ವರ್ಷಗಳ ಸಾಧನೆಯನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ ಸದಸ್ಯೆ ಸುನಿತಾ ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ವಿ. ವತ್ಸಲಾ, ತಾಲೂಕು ಪಂಚಾಯಿತಿ ಸದಸ್ಯ ಅಪ್ರು ರವೀಂದ್ರ, ಮಡಿಕೇರಿ ಬ್ಲಾಕ್ ಪ್ರಬಾರ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಮಡಿಕೇರಿ ನಗರ ಕಾಂಗ್ರೆಸ್ ಮುಖಂಡರಾದ ಉಸ್ಮಾನ್, ಪುಷ್ಪ, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಮೊಹಮದ್ ರಫೀಕ್, ಮೇರಿ ಅಂಬೂದಾಸ್, ಸುಲೋಚನಾ, ಸಿಂಧೂ ರಾಜನ್, ಯುವ ಕಾಂಗ್ರೆಸ್ ಅಧ್ಯಕ್ಷ ವಿನು ಕಾಫಿ ಬೋರ್ಡ್, ಇಸ್ಮಾಯಿಲ್ ಕೆ.ಎಂ., ಪೊನ್ನತ್ಮೊಟ್ಟೆಯ ನೌಶಾದ್, ಸಮದ್ ಹಾಗೂ ಚೆಟ್ಟಳ್ಳಿಯ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತೀರ್ಥಕುಮಾರ್, ಮಾಜಿ ಸದಸ್ಯರಾದ ಯೂಸಫ್ ಮಲುಕೋಡು, ಅಲಿ ಉಸ್ತಾದ್ ಲತೀಫ್ ಮತ್ತು ಕಾರ್ಯದರ್ಶಿ ಝುಬೇರ್ ನಿರೂಪಿಸಿ ವಂದಿಸಿದರು.