ಚೆಟ್ಟಳ್ಳಿ, ನ. 25: ಧರ್ಮಸ್ಥಳ ಸಂಘದಿಂದ ಕಾಳುಮೆಣಸು ಮತ್ತು ಹಣ್ಣಿನ ಬೆಳೆಗಳ ಕೃಷಿ ವಿಚಾರಗೋಷ್ಠಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ವತ್ಸಲ ಅಧ್ಯಕ್ಷತೆಯನ್ನು ವಹಿಸಿದ್ದರು.ಈ ಸಂದರ್ಭ ಸಂಘದ ವ್ಯವಸ್ಥಾಪಕರು ಮತ್ತು ಸದಸ್ಯರು ಹಾಜರಿದ್ದರು. ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಭಾರತದ ಸಂಸ್ಕøತಿಯನ್ನು ಉಳಿಸಿ-ಬೆಳಸುವಲ್ಲಿ ಧರ್ಮಸ್ಥಳ ಸಂಘ ಪ್ರಗತಿ ಪಥದಲ್ಲಿದೆ. ಮದ್ಯವ್ಯಸನಿಗಳಿಗೆ ಮದ್ಯವರ್ಜನ ಶಿಬಿರ ಏರ್ಪಡಿಸಿರುವದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಮಹಿಳೆಯರಿಗೆ ಸಾಲ ನೀಡಿ ಆರ್ಥಿಕ ಪ್ರೋತ್ಸಾಹ ನೀಡುತ್ತಿರುವದು ಶ್ಲಾಘನೀಯ. ಆದರೆ ಸಾಲ ಪಡೆದು ಸೋಮಾರಿಗಳಾಗದೇ ಕಾರ್ಯಶೀಲರಾಗಿ ಆರ್ಥಿಕ ಸಬಲರಾಗಿ ಎಂದು ಸಲಹೆಯಿತ್ತರು.