ಪೊನ್ನಂಪೇಟೆ, ನ. 25: ಇತ್ತೀಚೆಗೆ ಪೊನ್ನಂಪೇಟೆ ಕೊಡವ ಸಮಾಜಕ್ಕೆ ನೂತನವಾಗಿ ಅಧ್ಯಕ್ಷ ರಾಗಿ ಆಯ್ಕೆ ಯಾಗಿರುವ ರಾಜೀವ್ ಬೋಪಯ್ಯ ಅವರನ್ನು ಕಾನೂರು-ಕೋತೂರು ಗ್ರಾಮದ ವಿಘ್ನೇಶ್ವರ ಕೊಡವ ಸಂಘ ಹಾಗೂ ಬುಡ್‍ಕಣಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.ಕೇಚಮಾಡ ಗಣೇಶ್ ನಾಚಪ್ಪ ಮಾತನಾಡಿ, ರಾಜೀವ್ ಬೋಪಯ್ಯ ಅವರು ಜವಬ್ದಾರಿತ ಕೆಲಸವನ್ನು ವಹಿಸಿಕೊಂಡಿದ್ದಾರೆ. ಕೊಡಗಿನ ಆಚಾರ-ವಿಚಾರ, ಸಂಸ್ಕøತಿ ಇನ್ನಷ್ಟು ಬೆಳೆಸಲು ಇವರು ಮುಂದಾಗಲಿ ಎಂದರು. ಕಾನೂರು ಐನ್‍ಮನೆ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.