ಮಡಿಕೇರಿ, ನ. 26: ಮಡಿಕೇರಿಯ ಕೋಟೆ ಮಹಿಳಾ ವಿವಿಧೋದ್ದೇಶ ಸಹಕಾರ ಸಮಾಜದ ಕಾವೇರಿ ತಂಡದ ವತಿಯಿಂದ ಇತ್ತೀಚೆಗೆ ಮಿಲನ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.ಅಧ್ಯಕ್ಷೆ ಬೇಬಿ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಮಹಿಳೆಯರು ಸಂಭ್ರಮಿಸಿದರು. ಸದಸ್ಯರಿಗೆ ಆಟೋಟ ಸ್ಪರ್ಧೆ, ಹಾಡುಗಾರಿಕೆ, ಒಗಟು ಹೇಳುವದು, ಮನೆ ಮದ್ದು ಕುರಿತು ಮಾಹಿತಿ, ಜೀವನದ ನೀತಿಪಾಠ ಇತ್ಯಾದಿ ಕಾರ್ಯಕ್ರಮಗಳು ನಡೆಯಿತು.

ಅತಿಥಿಗಳಾಗಿದ್ದ ಪ್ರೇಮಾ ಸೋಮಯ್ಯ ಸಭೆಯನ್ನುದ್ದೇಶಿಸಿ ಮಾತನಾಡಿದರು. ಭವಾನಿ ಸುಬ್ಬಯ್ಯ ನಿರೂಪಿಸಿ, ಬೋಜಮ್ಮ ತಿಮ್ಮಯ್ಯ ವಂದಿಸಿದರು. ತಾರಾ ಮುದ್ದಯ್ಯ ಆಟೋಟ ಸ್ಪರ್ಧೆ ನಡೆಸಿಕೊಟ್ಟರು. ಪದಾಧಿಕಾರಿಗಳಾದ ಪ್ರೇಮಾ ನಾಣಯ್ಯ, ಎಂ.ಸಿ. ಪಾರ್ವತಿ, ಶೀಲ ವಿಜಯ, ಟಿ.ಕೆ. ಕಾವೇರಮ್ಮ, ಲಲ್ಲು ಕುಟ್ಟಪ್ಪ, ನಳಿನಿ ಪೂವಯ್ಯ, ಲೌಲಿ ಮಾದಯ್ಯ ಮತ್ತಿತರರು ಹಾಜರಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.