ಕುಶಾಲನಗರ, ಡಿ. 14: ಕುಶಾಲನಗರ ಪಟ್ಟಣದ ಬಾಪೂಜಿ ಬಡಾವಣೆ ಹಾಗೂ ಬಸಪ್ಪ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಉದ್ಯಾನವನಗಳನ್ನು ಲೋಕಾರ್ಪಣೆಗೊಳಿಸಲಾಯಿತು.

2 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಬಾಪೂಜಿ ಬಡಾವಣೆ ಪಾರ್ಕ್ ಅನ್ನು ವಾರ್ಡ್ ಸದಸ್ಯ ಹೆಚ್.ಡಿ. ಚಂದ್ರು, 1.53 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಬಸಪ್ಪ ಬಡಾವಣೆ ಪಾರ್ಕ್ ಅನ್ನು ವಾರ್ಡ್ ಸದಸ್ಯೆ ರಶ್ಮಿ ಅಮೃತರಾಜ್ ಉದ್ಘಾಟಿಸಿದರು. 1 ಲಕ್ಷ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಬಳಿ ನಿರ್ಮಿಸಲಾದ ವೃತ್ತವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಜಗದೀಶ್ ಉದ್ಘಾಟಿಸಿದರು.

ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್, ಸದಸ್ಯರಾದ ಎಂ. ಹೆಚ್. ಫಜಲುಲ್ಲಾ, ಪ್ರಮೋದ್ ಮುತ್ತಪ್ಪ, ಸುರಯ್ಯಭಾನು, ಕವಿತಾ, ಲಲಿತಾ, ಅಭಿಯಂತರೆ ಶ್ರೀದೇವಿ ಹಾಗೂ ಸಿಬ್ಬಂದಿಗಳು ಇದ್ದರು.