ಸೋಮವಾರಪೇಟೆ, ಡಿ. 22: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಓಡಿಪಿ ಸಂಸ್ಥೆ, ಕೆ.ವಿ.ಕೆ. ಗೋಣಿಕೊಪ್ಪಲು ಇವುಗಳ ಸಹಯೋಗದೊಂದಿಗೆ ನಿಸರ್ಗ ಜಲಾನಯನ ಸಮಿತಿ ವತಿ ಯಿಂದ ಸಮೀಪದ ಕಿಬ್ಬೆಟ್ಟ ಗ್ರಾಮದ ಸಮುದಾಯ ಭವನದಲ್ಲಿ ಮೌಲ್ಯ ವರ್ಧಿತ ತರಬೇತಿ ಕಾರ್ಯಾಗಾರ ನಡೆಸಲಾಯಿತು. ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಹಾಯಕಿ ಎಂ.ಕೆ. ಪದ್ಮಾವತಿ ಭಾಗವಹಿಸಿ, ಮನೆಯಲ್ಲಿಯೇ ತಯಾರಿಸಬಹುದಾದ ಜ್ಯೂಸ್, ಜಾಮ್, ಹೋಂ ಮೇಡ್ ಚಾಕೋಲೆಟ್‍ಗಳ ತಯಾರಿ ವಿಧಾನ ಬಗ್ಗೆ ಪ್ರಾತ್ಯಕ್ಷತೆ ಮೂಲಕ ತರಬೇತಿ ನೀಡಿದರು. ನಿಸರ್ಗ ಜಲಾನಯನ ಸಮಿತಿ ಅಧ್ಯಕ್ಷ ಮಸಗೋಡು ಲೋಕೇಶ್, ಸದಸ್ಯ ಕಿಬ್ಬೆಟ್ಟ ಶೇಷಪ್ಪ, ಪ್ರೇಮಾ ಯೋಗೇಶ್, ಓಡಿಪಿ ಸಿಬ್ಬಂದಿ ಭುವನೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಗ್ರಾಮದ ವಿವಿಧ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಮಹಿಳೆಯರು, ರೈತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.