ಸುಂಟಿಕೊಪ್ಪ, ಡಿ. 23: ಇಲ್ಲಿನ ಮುತ್ತಪ್ಪ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಈ ವಿಭಾಗದ 6 ವರ್ಷದ ಒಳಗಿನ ಮಕ್ಕಳ ಆರೋಗ್ಯ ತಪಾಸಣೆಯನ್ನು ಸೋಮವಾರಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಭರತ್ ನಡೆಸಿದರು.

ಪುಟಾಣಿ ಮಕ್ಕಳ ಹಾಗೂ ತಾಯಂದಿರ ಆರೋಗ್ಯ ಕಾಪಾಡಲು ಅನುಸರಿಸಬೇಕಾದ ವಿಧಾನವನ್ನು ವಿವರಿಸಿದ ಅವರು ಸಣ್ಣ ಮಕ್ಕಳ ತೂಕವನ್ನು ಆಗಾಗ್ಗೆ ಪರಿಶೀಲಿಸಬೇಕು. ಮಗುವಿಗೆ ಥೈರಾಯಿಡ್, ಬುದ್ಧಿಮಾಂದ್ಯ ಆಗುವ ಸಾಧ್ಯತೆಯಿದ್ದು ಈ ಬಗ್ಗೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಅಂಗನವಾಡಿ ಕಾರ್ಯಕರ್ತೆ ಜೆಸ್ಸಿ ಡಿಸೋಜ ಹಾಗೂ ಸಹಾಯಕಿ ಹಾಜರಿದ್ದರು.