ಸುಂಟಿಕೊಪ್ಪ, ಡಿ. 23: ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾದ ಉಜ್ವಲ ಗ್ಯಾಸ್ ಯೋಜನೆಯ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರನ್ನು ತಾ.ಪಂ. ಸದಸ್ಯೆ ವಿಮಲಾವತಿ ವಿತರಿಸಿದರು. ಇಲ್ಲಿನ ಕೊಡಗು ಇಂಡೇನ್ ಗ್ಯಾಸ್ ವತಿಯಿಂದ 18 ಮಂದಿ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ವಿತರಿಸಲಾಯಿತು. ಈ ಸಂದರ್ಭ ಗ್ರಾ.ಪಂ. ಸದಸ್ಯರುಗಳಾದ ಬಿ.ಎಂ. ಸುರೇಶ್, ಸಿ. ಚಂದ್ರ, ಜ್ಯೋತಿ ಭಾಸ್ಕರ್, ಗಿರಿಜಾ ಉದಯ್ ಕುಮಾರ್, ಸುಂಟಿಕೊಪ್ಪ ನಗರ ಬಿಜೆಪಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಕೊಡಗು ಇಂಡೇನ್ ಗ್ಯಾಸ್‍ನ ಸಿಬ್ಬಂದಿ ರಾಕೇಶ್ ಮತ್ತಿತರರು ಇದ್ದರು.