ಸುಂಟಿಕೊಪ್ಪ, ಡಿ. 23: ಮಾರುತಿ ಎರ್ಟಿಗೋ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಮಗುಚಿಕೊಂಡ ಪರಿಣಾಮ ನಾಲ್ವರು ಗಾಯಗೊಂಡಿರುವ ಘಟನೆಯೊಂದು ಶನಿವಾರ ವರದಿಯಾಗಿದೆ.

ಬೆಂಗಳೂರಿನಿಂದ ಪ್ರವಾಸಕ್ಕೆಂದು ಮಡಿಕೇರಿಗೆ ಆಗಮಿಸುತ್ತಿದ್ದ ಸಂದರ್ಭ ಮಧ್ಯಾಹ್ನ 3 ಗಂಟೆಯ ಸಂದರ್ಭದಲ್ಲಿ ಮಾರುತಿ ಎರ್ಟಿಗೋ (ಕೆಎ-05 ಎಜಿ 3109) ವಾಹನದಲ್ಲಿ ಬೆಂಗಳೂರಿನಿಂದ 7 ಜನ ಯುವಕರ ತಂಡವು ಪ್ರಯಾಣಿಸುತ್ತಿದ್ದರು ಸುಂಟಿಕೊಪ್ಪ ಸಮೀಪದ ಬಾಳೆಕಾಡು ತೋಟದ ಬಳಿಯಲ್ಲಿ ಹೆದ್ದಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು ರಸ್ತೆಯಲ್ಲಿಯೇ ಮಗುಚಿಕೊಂಡಿದೆ. ವಾಹನವು ಹೆದ್ದಾರಿ ಬದಿಯ ಚರಂಡಿಯಲ್ಲಿ ನಿಂತಿದ್ದು, ವಾಹನದಲ್ಲಿ ಪ್ರಯಾಣಿಸುತ್ತಿದ್ದ 7 ಮಂದಿಯ ಪೈಕಿ ಮೂವರು ಸಣ್ಣ ಪುಟ್ಟ ಗಾಯಗೊಂಡಿದ್ದಾರೆನ್ನಲಾಗಿದ್ದು, ಮತ್ತೋರ್ವನ ಕಾಲು ತಲೆಯ ಬಾಗಕ್ಕೆ ತೀವ್ರ ತರಹದ ಪೆಟ್ಟಾಗಿದ್ದು ಗಾಯಾಳುಗಳನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸ್ ಠಾಣಾ ಸಿಬ್ಬಂದಿಗಳು ತೆರಳಿ ಸ್ಥಳ ಮಹಜರು ನಡೆಸಿ ವಾಹನ ಚಾಲಕ ಗಗನ್‍ದೀಪ್ ಸಿಂಗ್‍ರ ದೂರಿನ ಮೇರೆ ಮುಂದಿನ ಕ್ರಮಕೈಗೊಂಡಿದ್ದಾರೆ.