ಕುಶಾಲನಗರ, ಡಿ. 23: ಕುಶಾಲನಗರ ಗೌಡ ಸಮಾಜ ಸಂತೋಷಕೂಟ ಸಮಾರಂಭ-2017 ರ ಅಂಗವಾಗಿ ಸಮಾಜದ ಸಭಾಂಗಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮಕ್ಕೆ ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಯಾವದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವದು ಮುಖ್ಯವೇ ಹೊರತು ಗೆಲುವು ಸೋಲು ಮುಖ್ಯವಲ್ಲ ಎಂದರು. ಎರಡು ದಿನಗಳ ಸಂತೋಷಕೂಟ ಸಮಾರಂಭದ ಯಶಸ್ಸಿಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.

ಸಮುದಾಯದ ಮಕ್ಕಳಿಗೆ ವೈಯಕ್ತಿಕ ವಿಭಾಗದಲ್ಲಿ ನೃತ್ಯ, ಕೋಲಾಟ, ಜಾನಪದ ನೃತ್ಯ, ಸಮೂಹ ನೃತ್ಯ, ಗಾಯನ ಸ್ಪರ್ಧೆ ಹಾಗೂ ಹಿರಿಯರಿಗೆ ಭಾವಗೀತೆ, ಜನಪದ ಗೀತೆ, ಸಮೂಹ ಗೀತೆ, ಏಕಪಾತ್ರಾಭಿನಯ ಮತ್ತಿತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭ ಸಮಾಜದ ಪ್ರಮುಖರಾದ ಪೊನ್ನಚ್ಚನ ಮೋಹನ್, ಕರಂದ್ಲಾಜೆ ಆನಂದ್, ಚಿಲ್ಲನ ಗಣಿಪ್ರಸಾದ್, ಕುಂಬುಗೌಡನ ಸೋಮಣ್ಣ, ಸೂದನ ಗೋಪಾಲ್, ಹಾಲುಗುಂಜ ಕೃಷ್ಣಮೂರ್ತಿ, ಬೈಮನ ಪೊನ್ನಪ್ಪ ಇದ್ದರು.

ಕಡ್ಯದ ದೇವಕಿ ಪ್ರಾರ್ಥಿಸಿದರು, ಬೈಮನ ಭೋಜಮ್ಮ ಪೊನ್ನಪ್ಪ ಸ್ವಾಗತಿಸಿದರು, ಪೆರುಬಾಯಿ ತುಳಸಿ ಕಾರ್ಯಕ್ರಮ ನಿರೂಪಿಸಿದರು, ಸೂದನ ಲೀಲಾ ಗೋಪಾಲ್ ವಂದಿಸಿದರು.