ಮಡಿಕೇರಿ, ಡಿ. 23: ಮಾಡಲಿಂಗ್ ಹಾಗೂ ಬೆಳ್ಳಿತೆರೆಯಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯ ರೂಪದರ್ಶಿ ಹಾಗೂ ನಟಿ ತೇಜಸ್ವಿನಿ ಶರ್ಮಾ ರಾಜ್ಯಮಟ್ಟದ ಕಲಾ ಕುಸುಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ಭಾರತೀಯ ಸಾಂಸ್ಕøತಿಕ ಅಕಾಡೆಮಿ ಹಾಗೂ ಕರ್ನಾಟಕ ಸಾಂಸ್ಕøತಿಕ ಅಕಾಡೆಮಿ ಆಶ್ರಯದಲ್ಲಿ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇವರು ಪ್ರಸ್ತುತ ಬಾರಿಕೆ ಬ್ರದರ್ಸ್ ಪ್ರೊಡಕ್ಷನ್ ಬ್ಯಾನರ್‍ನ ನಿರ್ಮಾಣದ ಗಣೇಶ್ ಪಿಲಿಕಲ್ಲು, ಸೋಮಶೇಖರ್ ಬಾರಿಕೆ ಹಾಗೂ ಆರ್.ಎನ್.ಆರ್. ನಿರ್ದೇಶನದ ‘ಬೈಲಾ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಪ್ರಾರಂಭಗೊಂಡಿದ್ದು, ಮಡಿಕೇರಿಯ ಸುತ್ತ ಮುತ್ತ ಚಿತ್ರೀಕರಣವಾಗುತ್ತಿದೆ.

ತೇಜಸ್ವಿನಿ ಶರ್ಮಾ ಮಡಿಕೇರಿಯ ಉದ್ಯಮಿ ಪ್ರಸನ್ನ ಭಟ್ ಹಾಗೂ ನಗರಸಭಾ ಸದಸ್ಯೆ ಸಂಗೀತಾ ಪ್ರಸನ್ನ ಅವರ ಪುತ್ರಿಯಾಗಿದ್ದಾರೆ.